ನನ್ನ ಜೈಲಿಗೆ ಹಾಕಿದ್ರೂ ಸರಿಯೇ ಪಾದಯಾತ್ರೆ ನಿಲ್ಲಿಸೋದಿಲ್ಲ: ಡಿಕೆ ಶಿವಕುಮಾರ್ | ಜನತಾ ನ್ಯೂಸ್
ರಾಮನಗರ : ನಾವು ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಡೆಸುತ್ತಿರುವಂತ ಪಾದಯಾತ್ರೆ ನಿಲ್ಲಿಸೋದಿಲ್ಲ. ನನ್ನ ಜೈಲಿಗೆ ಹಾಕಿದ್ರೂ ಸರಿಯೇ ಪಾದಯಾತ್ರೆ ನಿಲ್ಲಿಸೋದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.
ಪಾದಯಾತ್ರೆ ನೀರಿನ ಸಮಸ್ಯೆಯ ದೊಡ್ಡ ಕಾರ್ಯಕ್ರಮ. ನಮ್ಮ ಜಿಲ್ಲೆಯಲ್ಲಿ ಒಬ್ಬ ಕೊರೊನಾ ಸೋಂಕಿತ ಐಸಿಯುನಲ್ಲಿ ಇಲ್ಲ. ಒಬ್ಬರೂ ಸಹ ಸತ್ತಿಲ್ಲ. ಬಿಜೆಪಿಯವರು ನಮ್ಮ ಪಾದಯಾತ್ರೆ ತಡೆಯಬೇಕು ಅಂತ ಸುಳ್ಳು ಕೊರೊನಾ ಪ್ರೆಕರಣಗಳ ಸಂಖ್ಯೆಯನ್ನು ನೀಡುತ್ತಿದ್ದಾರೆ.
ಈಗಾಗಲೇ ಅಧಿಕಾರಿಗಳಿಗೆ ಕೇಸ್ ಹಾಕುವಂತೆ ಹೇಳಿದ್ದಾರೆ. ನಾವು ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸೋದಿಲ್ಲ. ನಮ್ಮ ಬಂಧಿಸಿ, ಶರ್ಟ್, ಪ್ಯಾಂಟ್ ಬಿಚ್ಚಿ ಜೈಲಲ್ಲಿ ಕೂರಿಸಿದ್ರೂ ಸರಿಯೇ. ನಮಗೆ ಏನು ತೊಂದರೆ ಕೊಡಬೇಕೋ ಕೊಡಲಿ ಎಂದು ಸವಾಲು ಹಾಕಿದ್ದಾರೆ.
ಜನರಿಗೋಸ್ಕರ ಮಾಡುತ್ತಿರುವ ಈ ಹೋರಾಟ ಖಂಡಿತ ನಡೆಯುತ್ತದೆ. ಪಾದಯಾತ್ರೆಗೆ ಎಲ್ಲ ಸಿದ್ದತೆಯನ್ನು ಮಾಡಿಕೊಂಡಿದ್ದೇವೆ, ಹೋರಾಟ ನಡೆಸಲು ಮುಂದಕ್ಕೆ ಹೆಜ್ಜೆ ಹಾಕಿದ್ದೇವೆ. ನಾವು ಕಾಂಗ್ರೆಸ್ಸಿಗರು ಎಲ್ಲ ತ್ಯಾಗ, ಬಲಿದಾನಕ್ಕೂ ಬದ್ಧರಾಗಿದ್ದೇವೆ. ಸರ್ಕಾರ ಏನು ಮಾಡುತ್ತದೆಯೋ ಮಾಡಲಿ ಎಂದಿದ್ದಾರೆ.